PM KISAN SAMMAN NIDHI YOJANA:
ಕೇಂದ್ರ ಸರ್ಕಾರವು ರೈತರನ್ನು ಕೃಷಿಯಲ್ಲಿ ಹೆಚ್ಚಿಗೆ ಉಪಯೋಗಿಸುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM KISAN SAMMAN NIDHI YOJANA) ಕೂಡ ಒಂದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಈಗಾಗಲೇ 16ನೇ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ(Bank Account) ಜಮಾ ಮಾಡಲಾಗಿದೆ, 17ನೇ ಕಂತಿನ ಹಣ ಯಾವಾಗ ಬರಲಿದೆ ಎನ್ನುವ ಮಾಹಿತಿ ಲೇಖನದಲ್ಲಿ ವಿವರಿಸಲಾಗುತ್ತದೆ, ಕೃಷಿ ವಿಷಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭೂಮಿಯ ಪರಿಶೀಲನೆ ಮಾಡುವುದು ಅಗತ್ಯ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಫಲವನ್ನು ಪಡೆಯುವ ರೈತರು ಎರಡು ಅಥವಾ ಎರಡಕ್ಕಿಂತ ಹೆಚ್ಚು ಏಕರೆ(acre) ಭೂಮಿಯನ್ನು ಹೊಂದಿರಬೇಕು, ಅವರ ಬಳಿ ಇರುವಂತಹ ಭೂಮಿಯನ್ನು ಪರಿಶೀಲಿಸುವುದು ಅವಶ್ಯಕವಾಗಿದೆ, ಹೀಗಾಗಿ ರೈತರು ತಮ್ಮ ಜಮೀನಿನ ದಾಖಲಾತಿಗಳನ್ನು(Land Documents) ಪರಿಶೀಲಿಸುವುದರ ಜೊತೆಗೆ, ಈ ಯೋಜನೆಗೆ ಅದನ್ನು ಲಿಂಕ್ ಮಾಡಬೇಕು. ನಿಮ್ಮ ಹತ್ತಿರವಿರುವ ಸೈಬರ್ ಕೆಫೆ(Cyber) ಇಲ್ಲವೇ ಇ-ಮಿತ್ರ(e-mitra) ಮಾಹಿತಿ ತಾಣಕ್ಕೆ ಭೇಟಿ ನೀಡಿ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲವನ್ನು ಪಡೆಯಲು ಅರ್ಹರಾಗುವಿರಿ.
ಈ ದಿನ 17ನೇ ಕಂತಿನ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಲಿದೆ.
ಪಿಎಮ್ ಕಿಸಾನ್ ಗೆ ಅರ್ಹರಿರುವ ರೈತರಿಗೆ ಪ್ರತಿ ವರ್ಷ ರೂ.6,000 ಅವರ ಬ್ಯಾಂಕ್ ಖಾತೆಗೆ(Bank Account) ಜಮಾ ಆಗುತ್ತದೆ, ಮೊದಲನೇ ಕಂತಿನ ಹಣವು ವರ್ಷದ ಏಪ್ರಿಲ್ ನಿಂದ ಜುಲೈ ತಿಂಗಳ ನಡುವೆ ಬರಲಿದೆ, ಅದರಂತೆ ಎರಡನೇ ಕಂತಿನ ಹಣವು ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳ ಒಳಗೆ ರೈತರ ಖಾತೆಗೆ ಜಮಾ ಆಗುತ್ತದೆ, ಮೂರನೇ ಕಂತಿನ ಹಣವು ಡಿಸೆಂಬರ್ ನಿಂದ ಮಾರ್ಚ್ ತಿಂಗಳ ನಡುವೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ. ಅರ್ಹ ಫಲಾನುಭವಿ ರೈತರಿಗೆ ಪ್ರತಿ ವರ್ಷವೂ ಅವರ ಬ್ಯಾಂಕ್ ಖಾತೆಗೆ ರೂ.6000 ಜಮಾ ಆಗಲಿದೆ, ರೈತರು ಈ ಹಣವನ್ನು ಪಡೆದುಕೊಂಡು ಆರ್ಥಿಕ ನೆರವನ್ನು(Financial Support) ಪಡೆದುಕೊಂಡು, ಕೃಷಿ ಚಟುವಟಿಕೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ.